Target PDO
Open in Telegram
ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.✍
Show more1 944
Subscribers
No data24 hours
-87 days
-3030 days
Posts Archive
1 944
*ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?*
ಇದು *ಅಮೆರಿಕದಲ್ಲಿ* ನಡೆದ ನಿಜ ಜೀವನದ ಘಟನೆಯಂತೆ.
ಆ *ಗಂಡ ಹೆಂಡತಿ* ಇಬ್ಬರೂ ಪ್ರೀತಿಸಿ ಮದುವೆಯಾದರು. 20 ವರ್ಷಗಳ ಕಾಲ ಹೇಗೋ ಏನೋ *ಗಂಡ- ಹೆಂಡಿರಂತೆ* ಜೀವನ ನಡೆಸಿದರು. ಆತನಿಗೆ ಬಿಡುವಿಲ್ಲದಷ್ಟು *ಕೆಲಸ*. ಮನೆಯ ಕಡೆ, ಮಡದಿಯ ಕಡೆ, ಸ್ವಲ್ಪ ಗಮನ ಕಡಿಮೆ.
ಇದ್ದಕ್ಕಿದ್ದಂತೆ ಒಂದು ದಿನ *ಹೆಂಡತಿ* ಕೇಳಿದಳು. “*ನಾನು ಇಂದೆ ಸತ್ತರೆ ನನ್ನ ಅಂತ್ಯಕ್ರಿಯೆ ಹೇಗೆ ಮಾಡುತ್ತೀರಿ*?” ದಿಡೀರ್ ಪ್ರಶ್ನೆಯಿಂದ ಸ್ವಲ್ಪ ವಿಚಲಿತನಾದ *ಗಂಡ* ಸಾವರಿಸಿಕೊಂಡು ಉತ್ತರಿಸಿದ. “ *ತುಂಬಾ ಪುಷ್ಪಗುಚ್ಛಗಳು, ಬೆಲೆಬಾಳುವ ಶವ ಪೆಟ್ಟಿಗೆ, ನಿನ್ನ ಗುಣಗಾನ ಮಾಡಿ ಆತ್ಮಕ್ಕೆ ಶಾಂತಿಯನ್ನು ಕೋರುವ ಪ್ರಾರ್ಥನಾ ಸಭೆಗಳು*, ಮುಂತಾದವು ಎಲ್ಲ ಇರುತ್ತವೆ.
ಏಕೆ ಈ ಪ್ರಶ್ನೆ ?
*ಹೆಂಡತಿ* ಪ್ರಶ್ನಿಸಿದಳು, “*ತುಂಬಾ ಖರ್ಚಾಗುವುದಿಲ್ಲವೇ*”
*ಗಂಡ* ಹೇಳಿದ *ಹತ್ತಾರು ಸಾವಿರ ಡಾಲರ್ ಖರ್ಚಾಗಬಹುದು, ಆದರೆ ಅದು ನನ್ನ ಕರ್ತವ್ಯವಲ್ಲವೇ*?
*ಹೆಂಡತಿ* ಹೇಳುತ್ತಾಳೆ “*ನಾನು ಸತ್ತ ಮೇಲೆ ನೀವು ಕೊಡುವ ಸಾವಿರಾರು ಡಾಲರ್ ಬೆಲೆ ಬಾಳುವ ಪುಷ್ಪಗುಚ್ಛಗಳು ನಾನು ನೋಡಲಾಗುವುದಿಲ್ಲ ,ಗುಣಗಾನದ ಮಾತುಗಳನ್ನು ಕೇಳಲಾಗುವುದಿಲ್ಲ, ಇವೆಲ್ಲ ನನಗೇನು ಪ್ರಯೋಜನವಾಗುವುದಿಲ್ಲ. ಏಕೆಂದರೆ ನಾನು ಕಳೆಬರವಾಗಿರುತ್ತೇನೆ. ಅದರ ಬದಲು ನಾನು ಬದುಕಿರುವಾಗಲೇ ಒಂದು ಗುಲಾಬಿ ಹೂ ಕೊಡಬಾರದೆ, ಒಂದು ಪ್ರೀತಿಯ ಮಾತು ಆಡಬಾರದೇ*,
ಈ ಮುಗ್ಧ ಮಾತು ಗಂಡನ ಹೃದಯ ಕಲಕಿತ್ತು .ಅಂದಿನಿಂದ ಜೀವನ ಶೈಲಿಯೇ ಬದಲಾಯಿತು.
ನಾನು ಬದುಕಿರುವಾಗಲೇ ಒಂದು *ಗುಲಾಬಿ ಕೊಡಬಾರದೆ*, ಒಂದು *ಪ್ರೀತಿಯ ಮಾತು ಆಡಬಾರದೇ* ಎಂಬ ಪ್ರಶ್ನೆ ಕೇಳಿ ಬರುತ್ತಿರುವುದು ಅಮೆರಿಕದಲ್ಲಿ ಮಾತ್ರವೇ ಅಲ್ಲ ,ನಮ್ಮ *ದೇಶದಲ್ಲಿ, ಊರಿನಲ್ಲಿ, ಮನೆಯಲ್ಲೇ* ಇಂತಹ ಹಲವಾರು ಪ್ರಶ್ನೆಗಳು ಕೇಳಿ ಬರುತ್ತಿರಬಹುದು, ಆದರೆ ನಮಗೆ ಕೇಳಿಸದೆ ಹೋಗಿರಬಹುದು,” *ಸತ್ತ ಮೇಲೆ ದೊಡ್ಡ ಫೋಟೋ* ಅದಕ್ಕೊಂದು *ಹಾರ*, *ಸಂತಾಪ ಸೂಚಕ ಸಭೆಗಳು*, ಅವರ *ಅಮೂಲ್ಯವಾದ ಸೇವೆಯ ಬಗ್ಗೆ ಭಾಷಣಗಳು*, *ನಿಮಿಷಗಟ್ಟಲೆ ಮೌನ*, *ಕೊಡಗತ್ತಲೆ ಕಣ್ಣೀರು ಇವೆಲ್ಲ ನಿಷ್ಠಯೋಜಕ*. ಏಕೆಂದರೆ ನಿರ್ಜೀವ ಕಳೆಬರಕ್ಕೆ ಇದ್ಯಾವುದರ ಪರಿವೆಯು ಇರುವುದಿಲ್ಲ.
ಅವರ *ಕಣ್ಣುಗಳಿಗೆ ಹೂವುಗಳನ್ನು* ನೋಡಿ *ಆನಂದಿಸುವ ಶಕ್ತಿ* ಇರುವಾಗ ಏಕೆ ಕೊಡಬಾರದು, ಅವರ *ಕಿವಿಗಳಿಗೆ* ಅವರ ಬಗ್ಗೆ ಆಡುವ *ಒಳ್ಳೆಯ ಮಾತುಗಳನ್ನು* ಕೇಳಿ *ಆನಂದಿಸುವ ಶಕ್ತಿ* ಇರುವಾಗ ಏಕೆ ಆಡಬಾರದು, ಇದು ನಾವು ಅವರಿಗೆ ತೀರಿಸಬೇಕಾದ *ಸಾಲ*! ಸತ್ತ ಮೇಲಲ್ಲ, ಬದುಕಿದ್ದಾಗ. ಸತ್ತ ಮೇಲೆ ಹಾಕುವುದು *ಪಿಂಡ*! ಅದು *ದಂಡ*!
🙏🙏🙏 *ಶುಭರಾತ್ರಿ* 🙏🙏🙏
*ಸಂಗ್ರಹ-🤝 ಶಿವಲಿಂಗೇಗೌಡ. ಮಂಡ್ಯ*.
1 944
★ LUXURY LIFE ಅಂದು & ಇಂದು: ★
✍🏻📋✍🏻📋✍🏻📋✍🏻📋✍🏻📋✍🏻📋✍🏻
1960 ರ ದಶಕದಲ್ಲಿ ಕಾರು & ಬೈಕು ಐಷಾರಾಮಿ ಆಗಿತ್ತು.
70 ರ ದಶಕದಲ್ಲಿ ಸೂಟು & ಬೂಟು ಐಷಾರಾಮಿಯಾಗಿತ್ತು.
80 ರ ದಶಕದಲ್ಲಿ TV & Landline ಐಷಾರಾಮಿಯಾಗಿತ್ತು.
90 ರ ದಶಕದಲ್ಲಿ ಬಂಗ್ಲೆ & ಕಂಪ್ಯೂಟರ್ ಐಷಾರಾಮಿಯಾಗಿತ್ತು.!!
2000 ರಲ್ಲಿ ಸಿನಿಮಾ ನೋಡೋದು ಐಷಾರಾಮಿಯಾಗಿತ್ತು.!!
2010ರಲ್ಲಿ ಮೊಬೈಲ್ ಫೋನ್ & ಪ್ರಿಡ್ಜ್ ಐಷಾರಾಮಿಯಾಗಿತ್ತು.!!
2015 ರಲ್ಲಿ ಮನೆಯಲ್ಲಿ Lift & Foreign Tour ಐಷಾರಾಮಿಯಾಗಿತ್ತು.!!
2020 ರಲ್ಲಿ Home Theatre & ಬೆಳಿಗ್ಗೆ ವಾಕಿಂಗ್ ಹೋಗೋದು ಐಷಾರಾಮಿಯಾಗಿತ್ತು.!!
2023ರಲ್ಲಿ Star Hotel ನಲ್ಲಿ ಊಟ ಮಾಡೋದು & ಪ್ರತಿಷ್ಠಿತ ಕಾಲೇಜುಗಳಲ್ಲಿ ಮಕ್ಕಳನ್ನು Admission ಮಾಡೋದು Luxury ಆಗಿದೆ.!!
ಆದರೆ 2025ರ ನಮ್ಮ ಕಾಲದಲ್ಲಿ ಇವೆಲ್ಲವೂ ಇಲ್ಲದ ಸಮಯವನ್ನು ಕಳೆಯುವುದೇ ಒಂದು Luxury Life ಆಗಬಹುದು.!!
(Spending time in absence of all these is a luxury)
LUXURY LIFE ಇನ್ಮುಂದೆ ಹೀಗಾಗತ್ತೆ ನೋಡಿ:
ಐಷಾರಾಮಿ ಇನ್ನು ಮುಂದೆ ವಾಕಿಂಗ್ ಹೋಗುವುದಲ್ಲ, Famous Hotel ನಲ್ಲಿ T ಕುಡಿಯೋದಲ್ಲ, ನೀವೇ ಮನೆಯಲ್ಲಿ ಬೆಲ್ಲದ ಚಹಾ ಸವಿಯೋದಾಗತ್ತೆ & ನಿಮ್ಮ ಸ್ವಂತ ಹಿತ್ತಲಿನಲ್ಲಿ ತಾಜಾ ಸಾವಯವ ಆಹಾರವನ್ನು ಬೆಳೆದು ತಿನ್ನುವುದಾಗುತ್ತದೆ.!!
ನಿಮ್ಮ ಮನೆಯಲ್ಲಿ ಲಿಪ್ಟ್, ಕಾರ್, ಬೈಕ್ ಇಲ್ಲದೇ,
3-4 ಅಂತಸ್ತಿನ ಮೆಟ್ಟಿಲುಗಳನ್ನು ಕಷ್ಟವಿಲ್ಲದೆ ಏರುವ ಸಾಮರ್ಥ್ಯ & ಸೈಕಲ್ ಸವಾರಿಯೇ Luxury Life.!
Luxury Life ಎಂದರೆ ದೊಡ್ಡ TV & ರೆಫ್ರಿಜರೇಟರ್ ಅನ್ನು ಖರೀದಿಸುವ ಸಾಮರ್ಥ್ಯವಲ್ಲ.
ದಿನಕ್ಕೆ 2-3 ಬಾರಿ ತಾಜಾ ಆಹಾರ (Fresh food ) ವನ್ನು ನೀವೇ ಬೇಯಿಸಿಕೊಂಡು ತಿನ್ನುವ ಸಾಮರ್ಥ್ಯವಾಗತ್ತೆ.!!
ಐಷಾರಾಮಿ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದುವುಲ್ಲ, ಹೋಮ್ ನಲ್ಲಿನ ಎಲ್ಲರೊಂದಿಗೆ ಹ್ಯಾಪಿ ಆಗಿ ಇರೋದಾಗತ್ತೆ.!!
✍🏻💐✍🏻💐✍🏻💐✍🏻💐✍🏻💐✍🏻💐✍🏻
1 944
ಸತ್ತು ಸಾಧಿಸುವುದೇನಿದೆ?
ಬದುಕಿ ಈ ಭೂಮಿ ಮೇಲಿದ್ದು ಸಾಧಿಸೋಣ. ಸಾಧಿಸಲಾಗದಿದ್ದರೆ ಕತ್ತೆ ಬಾಲ, ಹ್ಯಾಪಿ ಆಗಿರೋಣ! ಯಾವುದೋ ಹುಡುಗ ಕೈಕೊಟ್ಟ, ಯಾವುದೋ ಹುಡುಗಿ ಕೈ ಕೊಟ್ಟಳು. ಗಂಡನ ಕಿರಿಕಿರಿ, ಹೆಂಡ್ತಿಯ ವಾಚಾಳಿತನ, ಸಿಕ್ಕಾಪಟ್ಟೆ ಸಾಲ, ಪರೀಕ್ಷೆಯಲ್ಲಿ ಫೇಲಾದೆ, ಇವುಗಳೆಲ್ಲಾ ಕಾರಣವಾ?
ಅವನಿಲ್ಲದಿದ್ದರೂ ಬದುಕುತ್ತೇನೆ, ಅವಳಿಲ್ಲದಿದ್ದರೂ ಬದುಕುತ್ತೇನೆ ಎಂಬ ಹಠ ಇರಬೇಕು.
ಈ ಜನ ನಾಲ್ಕು ದಿನ ಮಾತಾಡುತ್ತಾರೆ. ಐದನೇ ದಿನಕ್ಕೆ ಅವರ ಸಮಸ್ಯೆಯೊಳಗೆ ಮುಳುಗಿ ಬಿಡುತ್ತಾರೆ!.
ಮನಸ್ಸು ಪಕ್ವ ಮಾಡಿಕೊಳ್ಳಿ, ತುಂಬಾ Sentiment ಆಗಬೇಡಿ. ಬೈದರು ಓಕೆ ಬೈಯದಿದ್ದರೂ Ok ಎಂದುಕೊಳ್ಳಿ. ಸೋಲುವುದನ್ನು ಮೊದಲು ಕಲಿತುಕೊಳ್ಳಿ, ಮನಸ್ಸು ಕೆಟ್ಟದಾಗಿ ಯೋಚಿಸಿದಾಗ ಒಂದು Walk ಹೋಗಿ ಬನ್ನಿ, ನಗಿಸುವ ಸ್ನೇಹಿತರ ಜತೆ ಮನಸ್ಸು ಬಿಚ್ಚಿ ನಗಾಡಿ. ಐದು ನಿಮಿಷ ಡ್ಯಾನ್ಸ್ ಮಾಡಿ ನಿಮಗೆ ನೀವೇ ಸರಿಯಾಗುತ್ತಿರಿ. ಆ ಭಯಂಕರವಾದ ಸನ್ನಿವೇಶದಿಂದ ಹೊರಬನ್ನಿ ಅಷ್ಟೇ, ಐದೇ ನಿಮಿಷ ನಿಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ.
ಈ ದೇಹ ಪಡೆದ ಮೇಲೆ ಕಷ್ಟ ಬರಲೇಬೇಕು. ಅವಮಾನ ಆಗಲೇಬೇಕು. ನೋವು ಆಗೇ ಆಗುತ್ತದೆ. ಅದಕ್ಕೆ ಹೆದರಿ ಸಾಯುವುದು ಎಷ್ಟು ಸರಿ ?.
ಇಲ್ಲಿಯವರೆಗೆ ಯಾವ ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾವ ಭಿಕ್ಷುಕರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದರ ಅರ್ಥ ಇಷ್ಟೇ, ತಿನ್ನಲು ಇಲ್ಲ ಅಂತ ಯಾರೂ ಆತ್ಮಹತ್ಯೆ ಮಾಡಿ ಕೊಂಡಿಲ್ಲ.. ಬೇಡದ ವಿಷಯಕ್ಕೆ, ಸಲ್ಲದ ಆಕಾಂಕ್ಷೆಗಳಿಗಾಗಿ, ತೀರದ ಬಯಕೆಗಳಿಗಾಗಿ ಆತ್ಮಹತ್ಯೆ ನಡೆಯುತ್ತಿವೆ. ಸಾವು ಅದಾಗಿಯೇ ಬರುವವರೆಗೂ ಬದುಕೋಣ, ನಗೋಣ, ನಗಿಸೋಣ, ಹ್ಯಾಪಿ ಆಗಿರೋಣ!.
